ಕರ್ನಾಟಕ ಬಹುಜನ ಹಿತರಕ್ಷಣೆ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಂ. ನರಸಿಂಹ ಮಾತನಾಡಿ, ಹೋಬಳಿ ಕೇಂದ್ರವಾಗಿರುವ ಕುಂದಾಣ ಗ್ರಾಮದ ವ್ಯಾಪ್ತಿ 25ಕ್ಕೂ ಹೆಚ್ಚು ಗ್ರಾಮಗಳಿವೆ. ವಿವಿಧ ರೋಗಗಳಿಂದ ಬಳಲುವ ನೂರಾರು ರೋಗಿಗಳು ದೂರದ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ರೋಗದ ತಪಾಸಣೆ ಮತ್ತು ಪರೀಕ್ಷೆ ಮಾಡಿಸುತ್ತಾರೆ. ಕೋವಿಡ್ ಸಂಕಷ್ಟದಲ್ಲಿ ರೋಗಿಗಳಿಗೆತೊಂದರೆಯಾಗುತ್ತಿದೆ’ ಎಂದರು.