ಮುಖಂಡ ರವಿಕುಮಾರ್ ಮಾತನಾಡಿ, ನಾಗರಬಾವಿ ಕುಂಟೆಯನ್ನು ಸ್ಥಳೀಯ ಅಯೋಧ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಮುಖಂಡರ ನೇತೃತ್ವದಲ್ಲಿ ಜೀಣೋದ್ಧಾರ ಮಾಡಲಾಗಿದೆ. ಕುಂಟೆ ಪಕ್ಕದಲ್ಲಿರುವ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಈ ನೀರನ್ನು ಕುಂಟೆಗೆ ಹರಿಸಬಹುದಾಗಿದ್ದು, ಪುರಸಭೆ ಅಧಿಕಾರಿಗಳು ಗಮನಹರಿಸಬೇಕೆಂದು ಮನವಿ ಮಾಡಿದರು.