ಮಾಕಳಿ ಬೆಟ್ಟದ ತಪ್ಪಲಿನ ಸೊಣ್ಣೇನಹಳ್ಳಿ ಗ್ರಾಮದ ಮಂಜುನಾಥರೆಡ್ಡಿ ಅವರು ಹಲವು ವರ್ಷಗಳಿಂದ ಮಾಕಳಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದರು. ಶತಮಾನಗಳಷ್ಟು ಹಿಂದೆ ಬೆಟ್ಟದಲ್ಲಿನ ಪ್ರಾಣಿ, ಪಕ್ಷಿಗಳ ಹಾಗೂ ಬೆಟ್ಟದಲ್ಲಿನ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು. ಕಾಲಾನಂತರದಲ್ಲಿ ಇವುಗಳಲ್ಲಿ ಹೂಳು ತುಂಬಿ, ಕಲ್ಲಿನ ಕಟ್ಟಡಗಳು ಶಿಥಿಲಗೊಂಡು ಬಿದ್ದು ಹೋಗಿದ್ದವು. ಸ್ನೇಹಿತರ ಶ್ರಮದಾನದ ಮೂಲಕ, 30 ಭಾನುವಾರಗಳ ಕಾಲ ಇವುಗಳನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ.