ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಕಾನೂನಿನಡಿ ಕರ್ತವ್ಯ ಲೋಪವಿಲ್ಲದೆ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಯುವಕ ಸಂಘಗಳು, ಇಲಾಖೆ ಸಿಬ್ಬಂದಿ ಪೂರ್ಣ ಪ್ರಮಾಣದ ಸಹಕಾರವೇ ಮುಖ್ಯ. ಅನೇಕ ಒತ್ತಡ ಸಮಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೂ, ಜಿಲ್ಲೆಯ ಜನರ ಸಹಕಾರ ತೃಪ್ತಿ ತಂದಿದೆ ಎಂದರು.