ಮುಖಂಡ ಗಟ್ಟಹಳ್ಳಿ ಸೀನಪ್ಪ ಮಾತನಾಡಿ, ಮುಖ್ಯರಸ್ತೆಯ ಅಭಿವೃದ್ಧಿಯಿಂದ ಹುಸ್ಕೂರು ಗ್ರಾಮದಿಂದ ಸಿಂಗೇನಅಗ್ರಹಾರ, ಗೂಳಿಮಂಗಲ, ಲಕ್ಷ್ಮೀನಾರಾಯಣಪುರ ಗ್ರಾಮಗಳಿಗೆ ಸಂಪರ್ಕ ರಸ್ತೆ ಕಲ್ಪಿಸಿದಂತಾಗಿದೆ. ಹುಸ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಂಪರ್ಕ ರಸ್ತೆ, ಬಸ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಮತ ನೀಡಿದವರ ಋಣವನ್ನು ಅಭಿವೃದ್ಧಿ ಮೂಲಕ ತೀರಿಸಬೇಕಾದುದ್ದು ಜನಪ್ರತಿನಿಧಿಗಳ ಕರ್ತವ್ಯ ಎಂದು ತಿಳಿಸಿದರು.