ಖಾಸಗಿ ಬಸ್ಗಳು ಈ ಭಾಗದಲ್ಲಿ ಸಂಚರಿಸಲು ಅವಕಾಶವನ್ನೆ ಕೊಡಬಾರದು ಎಂದು ಕೆಲ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದರು. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಜಾಗರೂಕತೆಯಿಂದ ಬಸ್ಸುಗಳನ್ನು ಚಾಲನೆ ಮಾಡುವಂತೆ ನೋಡಿಕೊಳ್ಳುತ್ತೇವೆ ಎಂದು ಮಾಲೀಕರು ಭರವಸೆ ನೀಡಿದರು. ಖಾಸಗಿ ಬಸ್ ಮಾಲೀಕರು, ವಿವಿಧ ಸಂಘಟನೆಗಳ ಮುಖಂಡರು, ಪೊಲೀಸ್ ಸಿಬ್ಬಂದಿ ಸಿದ್ದಲಿಂಗಪ್ಪ, ವೆಂಕಟೇಶ್, ಎಸ್.ಬಿ.ನಾಯಕ್, ಟಿ.ಮುನಿರಾಜು, ನರಸಿಂಹಮೂರ್ತಿ ಇದ್ದರು.