ಇಲ್ಲಿನ ಅಯೋದ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನಮಠ ಧರ್ಮಸಂಸ್ಥೆ, ನಗರ್ತ ಯುವಕ ಸಂಘ, ನಗರ್ತ ಮಹಿಳಾ ಸಂಘ, ನಗರೇಶ್ವರಸ್ವಾಮಿ ಸೇವಾ ಟ್ರಸ್ಟ್, ಹರಿಹರ ಬ್ರಹ್ಮರಥೋತ್ಸವ ಸಮಿತಿ, ಹರಿಹರ ಬ್ರಹ್ಮರಥೋತ್ಸವ ದಾಸೋಹ ಸಮಿತಿ, ಕೋರಮಂಗಲ ರುದ್ರಪ್ಪ ಟ್ರಸ್ಟ್, ರುದ್ರದೇವರ ದೇವಾಲಯ ಅಭಿವೃದ್ಧಿ ಟ್ರಸ್ಟ್ಸಹಯೋಗ ಮತ್ತು ನಗರದ ಜನರ ಸಹಕಾರದಿಂದ ಹೂಳು ತೆಗೆಯುವ ಕಾರ್ಯ ನಡೆದಿದೆ ಎಂದರು.
ಮುಖಂಡ ರುದ್ರಮೂರ್ತಿ ಮಾತನಾಡಿ, ಇದು ಪೂರ್ವಿಕರು ನಿರ್ಮಾಣ ಮಾಡಿರುವ ಕುಂಟೆ ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಜೀರ್ಣೋದ್ಧಾರಕ್ಕೆ ಗಮನ ಹರಿಸಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ₹5 ಲಕ್ಷ ಮಂಜೂರು ಮಾಡಿರುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಲಿಲ್ಲ. ಹಲವು ಸಂಘಟನೆಗಳ ನೆರವಿನಿಂದ ಹೂಳೆತ್ತುವ ಕಾರ್ಯ ನಡೆದಿದೆ ಎಂದು ತಿಳಿಸಿದರು.