ಪೋಷಕ ಹರೀಶ್ ಕುಮಾರ್ ಮಾತನಾಡಿ, ಸರ್ಕಾರಿ ಪ್ರೌಢ ಶಾಲೆ ಆರಂಭಗೊಂಡು 18 ವರ್ಷಗಳಿಂದ ಪರೀಕ್ಷಾ ಕೇಂದ್ರ ನಡೆಯುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಈವರೆಗೆ ಯಾವುದೇ ಒಂದು ಕಪ್ಪ ಚುಕ್ಕೆ ಅಂಟಿಲ್ಲ. ಸರ್ಕಾರಿ ಪ್ರೌಢ ಶಾಲೆಗಳಾದ ತಿಂಡ್ಲು, ಕುಂದಾಣ, ಕುಂದಾಣ ಮೊರಾರ್ಜಿ ವಸತಿ ಶಾಲೆ, ಬಚ್ಚಹಳ್ಳಿ, ಕೊಯಿರಾ ಮತ್ತು ಮಹಾ ಬೋಧಿ ಶಾಲೆಯ ವಿದ್ಯಾರ್ಥಿಗಳು ವಿಶ್ವಾನಾಥಪುರ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಪ್ರಸ್ತುತ ಅಲೂರು ದುದ್ದನಹಳ್ಳಿ ಬಳಿ ಇರುವ ಖಾಸಗಿ ಶಾಲೆಗೆ ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡಿರುವುದು ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ತೊಂದರೆಯಾಗುತ್ತಿದೆ ಎಂದರು.