ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಸಮಯದಲ್ಲಿ ನೀಡಲಾಗಿದ್ದ ದಿನಾಂಕಕ್ಕೆ ಅನುಸಾರ ರಾಗಿ ಖರೀದಿ ನಡೆಯದೇ ಇರುವುದು ಹಾಗೂ ಸೂಕ್ತ ಸಮಯಕ್ಕೆ ಟ್ರ್ಯಾಕ್ಟರ್ಗಳಿಂದ ರಾಗಿಯನ್ನು ಗೋದಾಮಿಗೆ ಹಾಕಲು ಕಾರ್ಮಿಕರನ್ನು ನೇಮಕಮಾಡಿಕೊಳ್ಳದೇ ಇರುವುದು, ರೈತರು ತರುವ ಚೀಲಗಳಿಂದ ರಾಗಿಯನ್ನು ಮತ್ತೆ ಬೇರೆ ಚೀಲಕ್ಕೆ ಬದಲಾಯಿಸುವುದು ಅಧಿಕಾರಿಗಳ ಈ ಎಲ್ಲಾ ತಪ್ಪುಗಳಿಂದ ರೈತರು ಖರೀದಿ ಕೇಂದ್ರದ ಬಳಿ ರಾತ್ರಿ ಹಗಲೆನ್ನದೆ ವನವಾಸ ಪಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.