ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ನಂದಿ ಬೆಟ್ಟದ ತಪ್ಪಲಿನ ಮೂರು ಕೆರೆಗಳು ಕೋಡಿ ಬಿದ್ದಿವೆ.
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಪ್ರಮುಖ ಕೆರೆಗಳಾದ ನಾಗರಕೆರೆ ಮುಕ್ಕಾಲು ಭಾಗದಷ್ಟು ತುಂಬಿದೆ. ಇದೇ ಸಾಲಿನಲ್ಲಿ ಬರುವ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.
ತಾಲ್ಲೂಕಿನ ತಳಗವಾರದಲ್ಲಿ ಐದು ಮನೆಗಳು ಕುಸಿದಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಬೆಳೆದು ನಿಂತಿದ್ದ ರಾಗಿ ಬೆಳೆ ನೆಲಕಚ್ಚಿದೆ.
ಮಳೆಗೆ ಮನೆಯ ಗೋಡೆ ಕುಸಿದಿರುವುದು.
ನಗರದಲ್ಲಿ ಅಂದಿನ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡರ ನೇತೃತ್ವದಲ್ಲಿ ಸಾರ್ವಜನಿಕರ ಸಹಾಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದ ರೋಜಿಪುರ, ಗಗನಾರ್ಯ ಮಠದ ಕಲ್ಯಾಣಿಗಳಲ್ಲಿ ಮಳೆ ನೀರು ತುಂಬಿವೆ. ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಅರ್ಧಕ್ಕು ಹೆಚ್ಚಿನ ಭಾಗ ನೀರು ಸಂಗ್ರಹವಾಗಿವೆ.