ನೆಲಮಂಗಲ: ಮಂಗಳವಾರ ರಾತ್ರಿ ಸಿಡಿಲಿಗೆ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, 25 ಮನೆಗಳು ಟಿ.ವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ.
ನಿವೃತ್ತ ಡಿಡಿಪಿಐ ನಾರಾಯಣರಾವ್ ಅವರ 2ನೇ ಮಹಡಿಯ ನೀರಿನ ಟ್ಯಾಂಕ್ನ ಕೆಳಗಿನ ಗೋಡೆ ಸಿಡಿಲು ಬಡಿದು ಬಿರುಕುಬಿಟ್ಟಿದ್ದು, ಸಿಮೆಂಟ್ ಪ್ಲಾಂಸ್ಟಿಂಗ್ ಕೆಳಗೆ ಬಿದ್ದಿದೆ, ಟ್ಯಾಂಕ್ಗೆ ಅಳವಡಿಸಿದ್ದ ಪೈಪ್ಗಳು ಒಡೆದು ಹೋಗಿವೆ, ಮನೆಯ ಎಲ್ಲ ಬಲ್ಬ್ಗಳು ಸುಟ್ಟುಹೋಗಿವೆ.
ರಾಜಗೋಪಾಲ್, ಪುರಸಭೆ ಮಾಜಿ ಸದಸ್ಯ ಮೂರ್ತಿ, ಲೋಕೇಶ್ ಹಾಗೂ ಇತರ ಮನೆಯಲ್ಲಿ ಉಪಕಣಗಳು ಸುಟ್ಟು ಹೋಗಿವೆ.