ಸಂಬಂಧಪಟ್ಟ ಗುತ್ತಿಗೆದಾರರು ಯಾರು ಎನ್ನುವುದು ಇದುವರೆಗೂ ಗೊತ್ತಾಗಿಲ್ಲ. ರಸ್ತೆ ವಿಸ್ತರಣೆ ಕಾಮಗಾರಿ ಗಾಗಿ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರೇ ಬೇರೆ, ಈ ಕಾಮಗಾರಿ ಮಾಡುತ್ತಿರುವವರೇ ಬೇರೆ. ಆದ್ದರಿಂದ ತ್ವರಿತವಾಗಿ ಈ ಕಾಮಗಾರಿ ಮುಗಿಸಿಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ಮಲಗಲು ಜಾಗವಿಲ್ಲದಂತಾಗಿದೆ. ಮನೆಗಳಲ್ಲಿ ಧಾನ್ಯಗಳು ಹಾಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.