ಸುಮಾರು ಒಂದು ಗಂಟೆ ಕಾಲ ಬೀಸಿದ ಗಾಳಿ ಮಳೆಯಿಂದಾಗಿ ಆವಲಯ್ಯನಪಾಳ್ಯ ಗ್ರಾಮದ ವಸಂತಮ್ಮ ಗುರುಮೂರ್ತಿ ಎಂಬುವರು ಸುಮಾರು 1 ಎಕರೆ ಜಮೀನಿನಲ್ಲಿ ₹40 ಲಕ್ಷ ಬ್ಯಾಂಕ್ ಸಾಲ ಪಡೆದು ನಿರ್ಮಿಸಿದ್ದ ಪಾಲಿಹೌಸ್ನ ಮೇಲ್ಭಾಗ ಸಂಪೂರ್ಣವಾಗಿ ಹಾರಿಹೋಗಿದೆ. ಅಲ್ಲದೆ ಪಾಲಿಹೌಸ್ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ಸರಳು, ಪಾಲಿ ಪೇಪರ್ ಭಾಗಶಃ ಹಾಳಾಗಿದೆ.