<p><strong>ದೇವನಹಳ್ಳಿ:</strong> ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ದೇಶಿನಾರಾಯಣಸ್ವಾಮಿ ಹಾಗೂ ರಾಮಚಂದ್ರಸ್ವಾಮಿ ರಥೋತ್ಸವ ಮತ್ತು ಕರಗ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈಚೆಗೆ ವಿಜೃಂಭಣೆಯಿಂದ ನೆರವೇರಿತು.</p>.<p>ನವ ದಿನಗಳ ಸಂಕಲ್ಪಪೂರಕವಾಗಿ ಅಂಕುರಾರ್ಪಣೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಪಂಚರಾತ್ರ ಆಗಮದಂತೆ ನಡೆಯಿತು. ನಂತರ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ಕೀಲುಕುದುರೆ, ತಮಟೆ ವಾದ್ಯ, ಹನುಮ ವೇಷಧಾರಿ ಮೆರವಣಿಗೆ ಹಾಗೂ ಎತ್ತುಗಳ ಪ್ರದರ್ಶನ ಗಮನ ಸೆಳೆಯಿತು.</p>.<p>ಸಾಯಿಬಾಬಾ ದೇವಾಲಯದ ವರೆಗೆ ಸಾಗಿದ ಮೆರವಣಿಗೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ವಿತರಿಸಲಾಯಿತು. ರಾತ್ರಿ ವೇಳೆ ದ್ರೌಪದಮ್ಮ ದೇವಿಯ ಕರಗ ಮಹೋತ್ಸವವೂ ನಡೆಯಿತು.</p>.<p>ಗ್ರಾಮದ ಭಕ್ತರು ರಥವನ್ನು ಎಳೆದು, ದವನ, ಬಾಳೆಹಣ್ಣು ಅರ್ಪಿಸಿದರು. ಮಹಿಳಾ ತಂಡದ ವೀರಗಾಸೆ ಪ್ರದರ್ಶನ ಭಕ್ತರ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ದೇಶಿನಾರಾಯಣಸ್ವಾಮಿ ಹಾಗೂ ರಾಮಚಂದ್ರಸ್ವಾಮಿ ರಥೋತ್ಸವ ಮತ್ತು ಕರಗ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈಚೆಗೆ ವಿಜೃಂಭಣೆಯಿಂದ ನೆರವೇರಿತು.</p>.<p>ನವ ದಿನಗಳ ಸಂಕಲ್ಪಪೂರಕವಾಗಿ ಅಂಕುರಾರ್ಪಣೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಪಂಚರಾತ್ರ ಆಗಮದಂತೆ ನಡೆಯಿತು. ನಂತರ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ಕೀಲುಕುದುರೆ, ತಮಟೆ ವಾದ್ಯ, ಹನುಮ ವೇಷಧಾರಿ ಮೆರವಣಿಗೆ ಹಾಗೂ ಎತ್ತುಗಳ ಪ್ರದರ್ಶನ ಗಮನ ಸೆಳೆಯಿತು.</p>.<p>ಸಾಯಿಬಾಬಾ ದೇವಾಲಯದ ವರೆಗೆ ಸಾಗಿದ ಮೆರವಣಿಗೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ವಿತರಿಸಲಾಯಿತು. ರಾತ್ರಿ ವೇಳೆ ದ್ರೌಪದಮ್ಮ ದೇವಿಯ ಕರಗ ಮಹೋತ್ಸವವೂ ನಡೆಯಿತು.</p>.<p>ಗ್ರಾಮದ ಭಕ್ತರು ರಥವನ್ನು ಎಳೆದು, ದವನ, ಬಾಳೆಹಣ್ಣು ಅರ್ಪಿಸಿದರು. ಮಹಿಳಾ ತಂಡದ ವೀರಗಾಸೆ ಪ್ರದರ್ಶನ ಭಕ್ತರ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>