ಈ ವರ್ಷ 220ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಹಿಂದಿ ಶಿಕ್ಷಕರು ಇಲ್ಲ. ಹೀಗಾಗಿ 2018ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 85 ಮಕ್ಕಳಲ್ಲಿ ಕೇವಲ 25 ಮಕ್ಕಳು ಪಾಸಾಗಿದ್ದಾರೆ. ‘2014–15ನೇ ಸಾಲಿನಲ್ಲಿ ನಮ್ಮೂರಿನ ಶಾಲೆಯ ಫಲಿತಾಂಶ ಉತ್ತಮವಾಗಿತ್ತು. ಆಗ ಓರ್ವ ವಿದ್ಯಾರ್ಥಿ ಶೇ 90 ಅಂಕ ಗಳಿಸಿದ್ದ. ಆದರೆ 3–4 ವರ್ಷಗಳಿಂದ ಶಿಕ್ಷಕರ ಕೊರತೆ ಆಗಿದೆ. ಅಲ್ಲದೆ, ಗದಗದಿಂದ ಬರುವ ಶಿಕ್ಷಕರೊಬ್ಬರು ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ. ಅವರನ್ನು ಈ ಶಾಲೆಯಿಂದ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ರಾಜು ಬೆಂಚಳ್ಳಿ, ಉಪಾಧ್ಯಕ್ಷ ವಿನಾಯಕ ಶಿರೋಳ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಿಳ್ಳಿ, ಆಕ್ರೋಶ ವ್ಯಕ್ತಪಡಿಸಿದರು.