ದೇವನಹಳ್ಳಿ: ಭಾರತದ ಸಂವಿಧಾನವೂ ಜಾತ್ಯತೀತ, ಸಮಾನತೆ, ಭ್ರಾತೃತ್ವ ತತ್ವದಲ್ಲಿ ರಚಿತಗೊಂಡಿದ್ದು ಎಲ್ಲಾ ಧರ್ಮದವರೂ ಒಗ್ಗಟ್ಟಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಎಎಪಿ ಮುಖಂಡ ಬಿ.ಕೆ. ಶಿವಪ್ಪ ತಿಳಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಎಎಪಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.