ಹೊಸಕೋಟೆ: ‘145ಕ್ಕೂ ಹೆಚ್ಚು ದೇಶಗಳಲ್ಲಿ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದ್ದು, ಸಮಾಜಕ್ಕಾಗಿ ಸೇವೆ ಮಾಡಲು ಇಚ್ಛಿಸುವವವರಿಗೆ ಸಂಸ್ಥೆ ಉತ್ತಮ ವೇದಿಕೆಯಾಗಿದೆ’ ಎಂದು ರೋಟರಿ ಹೊಸಕೋಟೆ ಸೆಂಟ್ರಲ್ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ವಿ. ವಿಜಯ್ ಕುಮಾರ್ ಹೇಳಿದರು.
ರೋಟರಿ ಸಂಸ್ಥೆಯ ಹೊಸಕೋಟೆ ತಾಲ್ಲೂಕು ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡು ಸೇವಾ ಚಟುವಟಿಕೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ, ತಾಲ್ಲೂಕಿನಲ್ಲಿ ಇಂದಿರಾನಗರದ ರೋಟರಿ ಸಂಸ್ಥೆ ಸಹಯೋಗದಲ್ಲಿ 34 ಶಾಲೆ, ಅಂಗನವಾಡಿಗಳಿಗೆ ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಜಿಲ್ಲಾ ಡೆಪ್ಯುಟಿ ಗೌರ್ನರ್ ಡಿ.ಎಸ್. ರಾಜಕುಮಾರ್ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವವರಿಗೆ ಸೇವಾ ಮನೋಭಾವ ತಾನಾಗಿಯೇ ಬರುತ್ತದೆ. ರೋಟರಿ ಸಂಸ್ಥೆಯಲ್ಲಿ ಮೇಲುಕೀಳು ಎಂಬ ಮನೋಭಾವವಿಲ್ಲ. ಸ್ವಾರ್ಥಕ್ಕಿಂತ ಸಮಾಜದ ಕೆಲಸವೇ ಮುಖ್ಯವೆಂದು ಕೆಲಸ ಮಾಡುವ ಗುಣ ಬೆಳೆಯುತ್ತದೆ ಎಂದರು.