ಮಹಾರಾಷ್ಟ್ರ ಮೂಲದ ಅಚಲ್, ಅಶೋಕ್ ಗೆಂಟವಾರ್ ಚಿಕ್ಕಬಳ್ಳಾಪುರದರಿಂದ ಬೆಂಗಳೂರಿಗೆ ಹಣದೊಂದಿಗೆ ಪ್ರಯಾಣಿಸುತ್ತಿದ್ದರು. ಎರಡು ಸಾವಿರ ಮುಖಬೆಲೆಯ ನೂರು ನೋಟಿನ ಒಂದು ಬಂಡಲ್ ಮತ್ತು ಐದು ನೂರು ರೂಪಾಯಿಗಳ 19 ಬಂಡಲ್ನ ₹9.5 ಲಕ್ಷ ಸೇರಿದಂತೆ ಒಟ್ಟು ₹11.5ಲಕ್ಷ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಹೇಳಿದರು. ತಪಾಸಣಾಧಿಕಾರಿಗಳಾದ ರಾಜಶೇಖರ್, ಚಂದ್ರಬಾಬು, ರಾಮಯ್ಯ, ನವೀನ್ ನಾಯ್ಕ, ಶ್ರೀನಿವಾಸ್ ಇದ್ದರು.