<p><strong>ಸೂಲಿಬೆಲೆ(ಹೊಸಕೋಟೆ):</strong> ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ ಸ್ವಾವಲಂಭಿತನದೊಂದಿಗೆ ಪುರುಷ ಸಮಾಜದಲ್ಲಿ ಸಮಾನ ಅವಕಾಶ ಸೃಷ್ಟಿಸಿಕೊಂಡು ಮುನ್ನುಗ್ಗಿದಾಗ ಮಾತ್ರ ಮಹಿಳಾ ಸಬಲಿಕರಣ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಸಂಗೀತಾ ಹೇಳಿದರು.</p>.<p>ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೇರಾ ಯುವಭಾರತ್ ಬೆಂಗಳೂರು ಗ್ರಾಮಾಂತರ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಸೂಲಿಬೆಲೆ ಗ್ರಾಮ ಪಂಚಾಯಿತಿ, ಆಶ್ರಯ ಸಂಜೀವಿನಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಶೇಷ ಮಹಿಳಾ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.</p>.<p>ಶಿಕ್ಷಣ ಪಡೆದಾಗ ಮಾತ್ರ ಹೆಣ್ಣಿನಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಹೊಸ ಬದಲಾವಣೆಯನ್ನು ನೀರಿಕ್ಷಿಸಬಹುದು ಎಂದು ಹೇಳಿದರು.</p>.<p>ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟಿನ ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ್, ಮಹಿಳೆ ಶಿಕ್ಷಣವನ್ನು ಪಡೆದಾಗ ಮಾತ್ರ ತನ್ನ ಅಸ್ತಿತ್ವದ ಮತ್ತು ತನ್ನ ಪುರೋಭಿವೃದ್ಧಿಗೆ ಬೇಕಾದ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.</p>.<p>ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯುವಲ್ಲಿ ಹೆಣ್ಣು ಮಕ್ಕಳು ಹಿಮ್ಮುಖವಾಗುತ್ತಿರುವುದು ವಿಷಾದನೀಯ ಸಂಗತಿ. ಸಾಧನೆ ಎಂಬುದು ಯಾರಪ್ಪನ ಸೊತ್ತು ಅಲ್ಲ ಅದನ್ನು ಮೆಟ್ಟಿ ನಿಲ್ಲುವ ಮಟ್ಟಕ್ಕೆ ಮಹಿಳೆ ಮುಂದಾದಾಗ ಮಾತ್ರ ಸಾಧಕರಾಗಿ ಹೊರ ಹೊಮ್ಮಲು ಸಾಧ್ಯ ಎಂದರು.</p>.<p>ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರಾದ ಬಿ.ಎನ್.ಗೋಪಾಲಗೌಡ, ಗ್ರಾ.ಪಂ.ಅಧ್ಯಕ್ಷ ಜನಾರ್ಧನರೆಡ್ಡಿ, ಜೇನುಗೂಡು ಟ್ರಸ್ಟ್ ಆಡಳಿತಾಧಿಕಾರಿಯಾದ ಸುಬ್ರಮಣಿ, ನಿರ್ದೇಶಕಿ ವಿಜಯಲಕ್ಷ್ಮಿ, ಪ್ರಭಾವತಿ, ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರ್, ವೈಜ್ಞಾನಿಕ ವಿಜ್ಞಾನಪರಿಷತ್ ಜಿಲ್ಲಾಧ್ಯಕ್ಷ ಉಮೇಶ್, ಶಿಕ್ಷಕ ರಾಮಚಂದ್ರರೆಡ್ಡಿ, ಮಾನವ ಹಕ್ಕುಗಳ ಅದ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಸುನೀತಾ, ಶುಶ್ರೂಕಿ ರುತ್ ಜೆಸೆಂತಾ, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ, ನಿರ್ದೇಶಕರಾದ ಸೈಯದ್ ಮಹಬೂಬ್, , ಜಿಯಾವುಲ್ಲಾ, ಆಶ್ರಯ ಸಂಜೀವಿನಿ ಒಕ್ಕೂಟದ ಅನುರಾಧ, ಸುಜಾತ ಇದ್ದರು.</p>.<p><strong>ಆಡಳಿತದಲ್ಲಿ ಗಂಡನ ಹಸ್ತಕ್ಷೇಪ ಸಲ್ಲ</strong></p><p> ಶಿಕ್ಷಣ ಪಡೆದ ಹೆಣ್ಣು ತನ್ನ ಪಾಲಿನ ರಾಜಕೀಯ ಹಕ್ಕನ್ನು ಸದೃಢವಾಗಿ ನಿಭಾಯಿಸುವ ಮಟ್ಟಕ್ಕೆ ಬೆಳೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಅಥವಾ ಮಹಿಳಾ ಸಬಲಿಕರಣ ಸಾಧ್ಯ ಇಲ್ಲವೆಂದರೆ ಚುನಾವಣೆಯಲ್ಲಿ ಗೆದ್ದು ಬಂದರೂ ಮಹಿಳೆ ತನ್ನ ಗಂಡನಿಂದ ಅಧಿಕಾರ ನಡೆಸುವ ಪರಿಸ್ಥಿತಿ ಎದುರಾಗುತ್ತದೆ ವಿಜಯಕುಮಾರಿ ಪಿಡಿಒ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೂಲಿಬೆಲೆ(ಹೊಸಕೋಟೆ):</strong> ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ ಸ್ವಾವಲಂಭಿತನದೊಂದಿಗೆ ಪುರುಷ ಸಮಾಜದಲ್ಲಿ ಸಮಾನ ಅವಕಾಶ ಸೃಷ್ಟಿಸಿಕೊಂಡು ಮುನ್ನುಗ್ಗಿದಾಗ ಮಾತ್ರ ಮಹಿಳಾ ಸಬಲಿಕರಣ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಸಂಗೀತಾ ಹೇಳಿದರು.</p>.<p>ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೇರಾ ಯುವಭಾರತ್ ಬೆಂಗಳೂರು ಗ್ರಾಮಾಂತರ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಸೂಲಿಬೆಲೆ ಗ್ರಾಮ ಪಂಚಾಯಿತಿ, ಆಶ್ರಯ ಸಂಜೀವಿನಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಶೇಷ ಮಹಿಳಾ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.</p>.<p>ಶಿಕ್ಷಣ ಪಡೆದಾಗ ಮಾತ್ರ ಹೆಣ್ಣಿನಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಹೊಸ ಬದಲಾವಣೆಯನ್ನು ನೀರಿಕ್ಷಿಸಬಹುದು ಎಂದು ಹೇಳಿದರು.</p>.<p>ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟಿನ ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ್, ಮಹಿಳೆ ಶಿಕ್ಷಣವನ್ನು ಪಡೆದಾಗ ಮಾತ್ರ ತನ್ನ ಅಸ್ತಿತ್ವದ ಮತ್ತು ತನ್ನ ಪುರೋಭಿವೃದ್ಧಿಗೆ ಬೇಕಾದ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.</p>.<p>ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯುವಲ್ಲಿ ಹೆಣ್ಣು ಮಕ್ಕಳು ಹಿಮ್ಮುಖವಾಗುತ್ತಿರುವುದು ವಿಷಾದನೀಯ ಸಂಗತಿ. ಸಾಧನೆ ಎಂಬುದು ಯಾರಪ್ಪನ ಸೊತ್ತು ಅಲ್ಲ ಅದನ್ನು ಮೆಟ್ಟಿ ನಿಲ್ಲುವ ಮಟ್ಟಕ್ಕೆ ಮಹಿಳೆ ಮುಂದಾದಾಗ ಮಾತ್ರ ಸಾಧಕರಾಗಿ ಹೊರ ಹೊಮ್ಮಲು ಸಾಧ್ಯ ಎಂದರು.</p>.<p>ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರಾದ ಬಿ.ಎನ್.ಗೋಪಾಲಗೌಡ, ಗ್ರಾ.ಪಂ.ಅಧ್ಯಕ್ಷ ಜನಾರ್ಧನರೆಡ್ಡಿ, ಜೇನುಗೂಡು ಟ್ರಸ್ಟ್ ಆಡಳಿತಾಧಿಕಾರಿಯಾದ ಸುಬ್ರಮಣಿ, ನಿರ್ದೇಶಕಿ ವಿಜಯಲಕ್ಷ್ಮಿ, ಪ್ರಭಾವತಿ, ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರ್, ವೈಜ್ಞಾನಿಕ ವಿಜ್ಞಾನಪರಿಷತ್ ಜಿಲ್ಲಾಧ್ಯಕ್ಷ ಉಮೇಶ್, ಶಿಕ್ಷಕ ರಾಮಚಂದ್ರರೆಡ್ಡಿ, ಮಾನವ ಹಕ್ಕುಗಳ ಅದ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಸುನೀತಾ, ಶುಶ್ರೂಕಿ ರುತ್ ಜೆಸೆಂತಾ, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ, ನಿರ್ದೇಶಕರಾದ ಸೈಯದ್ ಮಹಬೂಬ್, , ಜಿಯಾವುಲ್ಲಾ, ಆಶ್ರಯ ಸಂಜೀವಿನಿ ಒಕ್ಕೂಟದ ಅನುರಾಧ, ಸುಜಾತ ಇದ್ದರು.</p>.<p><strong>ಆಡಳಿತದಲ್ಲಿ ಗಂಡನ ಹಸ್ತಕ್ಷೇಪ ಸಲ್ಲ</strong></p><p> ಶಿಕ್ಷಣ ಪಡೆದ ಹೆಣ್ಣು ತನ್ನ ಪಾಲಿನ ರಾಜಕೀಯ ಹಕ್ಕನ್ನು ಸದೃಢವಾಗಿ ನಿಭಾಯಿಸುವ ಮಟ್ಟಕ್ಕೆ ಬೆಳೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಅಥವಾ ಮಹಿಳಾ ಸಬಲಿಕರಣ ಸಾಧ್ಯ ಇಲ್ಲವೆಂದರೆ ಚುನಾವಣೆಯಲ್ಲಿ ಗೆದ್ದು ಬಂದರೂ ಮಹಿಳೆ ತನ್ನ ಗಂಡನಿಂದ ಅಧಿಕಾರ ನಡೆಸುವ ಪರಿಸ್ಥಿತಿ ಎದುರಾಗುತ್ತದೆ ವಿಜಯಕುಮಾರಿ ಪಿಡಿಒ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>