ದೇವನಹಳ್ಳಿ: ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಡಿ.15 ರಂದು ಬೆಳಿಗ್ಗೆ 10 ಕ್ಕೆ ಗುರುಭವನದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಮೋರ್ಚಾ ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ, ಶೂದ್ರ ಮತ್ತು ಅತಿ ಶೂದ್ರ, ಅಲ್ಪಸಂಖ್ಯಾತರ ಸಾಚಾರ್ ಸಮಿತಿ ವರದಿ ಚರ್ಚೆಗೆ ಬರಲಿದೆ. ಜತೆಗೆ ವಿದ್ಯುತ್ ಮತಯಂತ್ರದ ರಹಸ್ಯ ಬಯಲು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.