ಆದರೆ ರೇಷ್ಮೆ ಮಾರುಕಟ್ಟೆ ಬಂದ್ ಆದಕಾರಣ ಯಾರೂ ಹಿಪ್ಪನೇರಳೆಯನ್ನು ಕೊಳ್ಳದೇ ಅದು ತೋಟದಲ್ಲಿ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಆಗ ಮಂಜುನಾಥ್ ತಾವೇ ರೇಷ್ಮೆ ಬೆಳೆಯಲು ಮುಂದಾದರು. ಮಾರುಕಟ್ಟೆಯಿಂದ ಎರಡನೇ ಜ್ವರದ 125 ಹುಳುಗಳನ್ನು ತೆಗೆದುಕೊಂಡು ಬಂದ ಮಂಜುನಾಥ್ ಅದನ್ನು ಚೆನ್ನಾಗಿ ಸಾಕಿ ಅದರಿಂದ ಸುಮಾರು 170 ಕೆಜಿ ಉತ್ತಮ ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆದರು.