ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸಿ’

Last Updated 10 ಡಿಸೆಂಬರ್ 2020, 5:43 IST
ಅಕ್ಷರ ಗಾತ್ರ

ಆನೇಕಲ್: ಪ್ರತಿ ಮನೆಯಲ್ಲೂಗ್ರಂಥಾಲಯವಿರಬೇಕು. ಓದಬೇಕೆಂಬ ಛಲವಿರಬೇಕು. ಆಗ ಉನ್ನತವಾದದ್ದನ್ನು ಸಾಧಿಸಲು ಸಾಧ್ಯ. ಹಾಗಾಗಿ ಅಧ್ಯಯನ ತಪಸ್ಸಿನಂತೆ ಮಾಡಬೇಕು ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸೇವಾ ಸಮಿತಿಯ ಗೌರವಾಧ್ಯಕ್ಷ ಮುನಿವೀರಪ್ಪ ತಿಳಿಸಿದರು.

ಅವರು ತಾಲ್ಲೂಕಿನ ಬಳ್ಳೂರಿನ ಅಂಬೇಡ್ಕರ್‌ ನಗರದಲ್ಲಿ ನಡೆದ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಶೋಷಿತರ ದನಿಯಾಗಿದ್ದರು. ಹೆಚ್ಚಿನ ಅಧ್ಯಯನ ಮಾಡಿ ಆಳವಾದ ಅನುಭವ ಪಡೆದಿದ್ದರು. ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಭಾರತಕ್ಕೆ ನೀಡಲು ಸಾಧ್ಯವಾಯಿತು. ಸಮಾನತೆ, ಸಹೋದರತೆ, ಜಾತ್ಯತೀತ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿ ಸಮಾಜ ದಲ್ಲಿ ಹಿಂದುಳಿದ ವರ್ಗಗಳು ಅಭಿವೃದ್ಧಿಯಾಗಲು ಅವಶ್ಯ ಕಾನೂನು ರೂಪಿಸಿದರು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಮುನಿಯಪ್ಪ, ನಾರಾಯಣಸ್ವಾಮಿ, ಇಳವರಸನ್‌, ಸತೀಶ್‌ರೆಡ್ಡಿ, ನಾರಾಯಣರೆಡ್ಡಿ, ಮಂಜು, ಮದನಗಿರಿಯಪ್ಪ, ವಿ. ಮಾರಪ್ಪ, ಪುಷ್ಪರಾಜು, ಗಣೇಶ್, ಮಂಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT