ದೇವನಹಳ್ಳಿ ನಗರದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಇಡಿ ನಗರದಲ್ಲಿ ಓಡಾಡಿದ್ದಾರೆ ಹೊಟೆಲ್ ಇತರೆಡೆ ತಿರುಗಾಡಿದ್ದಾರೆ. ಇಬ್ಬರಿಗೆ ಸೋಂಕು ಖಚಿತ ಪಟ್ಟಿದೆ ಎಂದು ಸಂದೇಶ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂಬ ವದಂತಿಗೆ ಸ್ಪಷ್ಠನೆ ನೀಡಿದ ಅವರು, ಮಾಲೂರಿನಿಂದ ಬಂದಿರುವ ಸುದ್ದಿ ಖಚಿತವಾಗಿತ್ತು. ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರಕ್ಕೆ ಶಂಕಿತ 17 ಜನರನ್ನು ಕಳುಹಿಸಿದ್ದರು. ಈ ಪೈಕಿ ಒಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಉಳಿದ 16 ಜನರು ಬೆಂಗಳೂರಿನ ಹಜ್ ಭವನವೊಂದರಲ್ಲಿ ಕ್ವಾರಂಟೇನ್ಗೆ ಒಳಗಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು. ಗುಜರಾತ್ನಿಂದ ಮಾಲೂರಿಗೆ ಬರುತ್ತಿದ 17 ಜನರ ತಂಡ ಕೋಲಾರ ಜಿಲ್ಲೆಯ ಪ್ರವೇಶವನ್ನು ಸ್ಥಳೀಯರು ನಿರಾಕರಿಸಿದ್ದಾರೆ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.