ತಾಲ್ಲೂಕು ಆಡಳಿತದಿಂದ ಶನಿವಾರ ಬಿಡುಗಡೆಯಾಗಿರುವ ಆರೋಗ್ಯ ಮಾಹಿತಿಯಂತೆ ಪ್ರಸ್ತುತ ತಾಲ್ಲೂಕಿನಲ್ಲಿ 2,047 ಮಂದಿಗೆ ಸೋಂಕು ತಗುಲಿದ್ದು, 1,430 ಮಂದಿ ಗುಣಮುಖರಾಗಿದ್ದಾರೆ. 71 ಜನ ಮೃತಪಟ್ಟಿದ್ದಾರೆ. ಶನಿವಾರ ಸಂಗ್ರಹ ಮಾಡಿರುವ 197 ಜನರ ಗಂಟಲ ದ್ರವ ಮಾದರಿ ಬೆಂಗಳೂರಿನ ರಾಜೀವ್ಗಾಂಧಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.