ಕಲ್ಯಾಣ ಮಂಟಪದಲ್ಲಿ ವೆಲ್ಡಿಂಗ್ ಕೆಲಸ ಮಾಡಲು ಸತ್ಯರಾಜ್ ಲಾಲ್ಬಾಗ್ ಸಿದ್ದಾಪುರದಿಂದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ಗೆ ಬಂದಿದ್ದರು. ಮಧ್ಯಾಹ್ನ ಮೊಬೈಲ್ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ಕಾಂಪೌಂಡ್ ಮೇಲಿದ್ದ ಹಾವೊಂದು ಹಣೆಯ ಮೇಲೆ ಕಚ್ಚಿದೆ. ಕೂಡಲೇ ಸತ್ಯರಾಜ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸತ್ಯರಾಜ್ ಮೃತಪಟ್ಟಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.