<p><strong>ಹೊಸಕೋಟೆ:2</strong>025-26 ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಶೇಷ ಯೋಜನೆ ಘೋಷಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ನೀವಾರಿಸುವಲ್ಲಿ ಸರ್ಕಾರಗಳು ಬಹುತೇಕ ವಿಫಲವಾಗಿ ಹಲವು ಸಂಕಷ್ಟಗಳ ಮುಂದುವರಿಕೆ ಮತ್ತು ದೌರ್ಜನ್ಯಗಳಿಗೆ ಕಾರಣವಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ವಾವಲಂಬಿ ಬದುಕಿಗೆ ಅಗತ್ಯ ಅನುಧಾನ ಮತ್ತು ವಿಶೇಷ ಯೋಜನೆ ಳನ್ನು ಮಿಸಲಿರಿಸಬೇಕೆಂದು ಒತ್ತಾಯಿಸಿರು.</p>.<p>ತಾಲ್ಲೂಕಿನ ಸೋಣದೇನಹಳ್ಳಿ, ಸೊಂಪುರ, ಓಬಳಹಳ್ಳಿ, ಪೆತ್ತನಹಳ್ಳಿ, ನಗರದ ದಂಡುಪಾಳ್ಯ, ಅಂಬೇಡ್ಕರ್ ಕಾಲೊನಿ, ಗೌತಮ್ ಕಾಲೊನಿ, ಚಿಕ್ಕತಗ್ಗಲಿ ಮೊದಲಾದ ಗ್ರಾಮಗಳಲ್ಲಿ 40 ರಿಂದ 50 ವರ್ಷಗಳಿಂದ ವಾಸಿಸುತ್ತಿರುವ ನೂರಾರು ದಲಿತರಿಗೆ ಮನೆಯ ಹಕ್ಕುಪತ್ರ ಇಲ್ಲದ ಅತಂತ್ರ ಸ್ಥಿತಿಗ ಸಿಲುಕಿದ್ದಾರೆ. ದಲಿತರು ಸತ್ತಾಗ ಅವರನ್ನು ಹೂಣಲು ಸ್ಮಶಾನವೂ ಇಲ್ಲ. ಇನ್ನೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಭವನಗಳು ಮಂಜೂರಾದರೂ ದಶಕ ಕಳೆದರೂ ನಿರ್ಮಾಣವಾಗಿಲ್ಲ. ಈ ಬಾರಿಯಾ ರಾಜ್ಯ ಬಜೆಟ್ನಲ್ಲಿ ದಲಿತರಿಗೆ ವಿಶೇಷ ಯೋಜನೆ ಘೋಷಣೆ ಮಾಡಬೇಕು.</p>.<p>ಎಸ್ಸಿಪಿ, ಟಿಎಸ್ ಪಿ ಅನುದಾನ ಸಮರ್ಪಕ ಬಳಕೆಯಾಗುವಂತೆ, ಪರಿಶಿಷ್ಟರಿಗೆ ನಿವೇಶನ, ಸಮುದಾಯ ಭವನ, ಸ್ಮಶಾನ ಭೂಮಿ ಮಂಜೂರು ಮಾಡುವಲ್ಲಿ ವಿಳಂಬ ಆಗುವುದನ್ನು ತಪ್ಪಿಸಬೇಕೆಂದು ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಘಟಕವು ಒತ್ತಾಯಿಸಿದೆ.</p>.<p>ತಾಲ್ಲೂಕು ಘಟಕ ಅಧ್ಯಕ್ಷ ಎಂ.ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಮುನಿರಾಜು, ಸಹ ಸಂಘಟನಾ ಸಂಚಾಲಕ ಜೆ.ಎಸ್. ಮುನಿರಾಜು, ಉಪಾಧ್ಯಕ್ಷ ಎಂ.ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:2</strong>025-26 ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಶೇಷ ಯೋಜನೆ ಘೋಷಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ನೀವಾರಿಸುವಲ್ಲಿ ಸರ್ಕಾರಗಳು ಬಹುತೇಕ ವಿಫಲವಾಗಿ ಹಲವು ಸಂಕಷ್ಟಗಳ ಮುಂದುವರಿಕೆ ಮತ್ತು ದೌರ್ಜನ್ಯಗಳಿಗೆ ಕಾರಣವಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ವಾವಲಂಬಿ ಬದುಕಿಗೆ ಅಗತ್ಯ ಅನುಧಾನ ಮತ್ತು ವಿಶೇಷ ಯೋಜನೆ ಳನ್ನು ಮಿಸಲಿರಿಸಬೇಕೆಂದು ಒತ್ತಾಯಿಸಿರು.</p>.<p>ತಾಲ್ಲೂಕಿನ ಸೋಣದೇನಹಳ್ಳಿ, ಸೊಂಪುರ, ಓಬಳಹಳ್ಳಿ, ಪೆತ್ತನಹಳ್ಳಿ, ನಗರದ ದಂಡುಪಾಳ್ಯ, ಅಂಬೇಡ್ಕರ್ ಕಾಲೊನಿ, ಗೌತಮ್ ಕಾಲೊನಿ, ಚಿಕ್ಕತಗ್ಗಲಿ ಮೊದಲಾದ ಗ್ರಾಮಗಳಲ್ಲಿ 40 ರಿಂದ 50 ವರ್ಷಗಳಿಂದ ವಾಸಿಸುತ್ತಿರುವ ನೂರಾರು ದಲಿತರಿಗೆ ಮನೆಯ ಹಕ್ಕುಪತ್ರ ಇಲ್ಲದ ಅತಂತ್ರ ಸ್ಥಿತಿಗ ಸಿಲುಕಿದ್ದಾರೆ. ದಲಿತರು ಸತ್ತಾಗ ಅವರನ್ನು ಹೂಣಲು ಸ್ಮಶಾನವೂ ಇಲ್ಲ. ಇನ್ನೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಭವನಗಳು ಮಂಜೂರಾದರೂ ದಶಕ ಕಳೆದರೂ ನಿರ್ಮಾಣವಾಗಿಲ್ಲ. ಈ ಬಾರಿಯಾ ರಾಜ್ಯ ಬಜೆಟ್ನಲ್ಲಿ ದಲಿತರಿಗೆ ವಿಶೇಷ ಯೋಜನೆ ಘೋಷಣೆ ಮಾಡಬೇಕು.</p>.<p>ಎಸ್ಸಿಪಿ, ಟಿಎಸ್ ಪಿ ಅನುದಾನ ಸಮರ್ಪಕ ಬಳಕೆಯಾಗುವಂತೆ, ಪರಿಶಿಷ್ಟರಿಗೆ ನಿವೇಶನ, ಸಮುದಾಯ ಭವನ, ಸ್ಮಶಾನ ಭೂಮಿ ಮಂಜೂರು ಮಾಡುವಲ್ಲಿ ವಿಳಂಬ ಆಗುವುದನ್ನು ತಪ್ಪಿಸಬೇಕೆಂದು ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಘಟಕವು ಒತ್ತಾಯಿಸಿದೆ.</p>.<p>ತಾಲ್ಲೂಕು ಘಟಕ ಅಧ್ಯಕ್ಷ ಎಂ.ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಮುನಿರಾಜು, ಸಹ ಸಂಘಟನಾ ಸಂಚಾಲಕ ಜೆ.ಎಸ್. ಮುನಿರಾಜು, ಉಪಾಧ್ಯಕ್ಷ ಎಂ.ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>