ರಥೋತ್ಸವದ ಅಂಗವಾಗಿ ಬೆಳಗಿನಿಂದಲೇ ವಿಶೇಷ, ಪೂಜೆ, ಹೋಮಗಳು ನಡೆದವು. ರಥೋತ್ಸವಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರಸನ್ನಲಕ್ಷ್ಮೀವೆಂಕಟ ರಮಣಸ್ವಾಮಿ ಉತ್ಸವ ನಡೆಸಲಾಯಿತು. ಮಹಿಳೆಯರಿಂದ ಭಕ್ತಿಗೀತೆ ಗಾಯನ, ವಿವಿಧ ತಂಡಗಳಿಂದ ಭಜನೆಗಳು ನಡೆದವು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ಅನ್ನಸಂತರ್ಪಣೆ, ಪಾನಕ ಕೋಸಂಬರಿ,ನೀರು,ಮಜ್ಜಿಗೆ ವಿತರಿಸಲಾಯಿತು.