ಕಲ್ಲಂಗಡಿ, ಕರುಬೂಜಿ, ದ್ರಾಕ್ಷಿ ಹಣಗಳನ್ನು ಬೆಳೆದಿರುವ ರೈತರು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರು ಮಾರಾಟ ಮಾಡಲು ಸ್ಥಳೀಯ ಆಡಳಿತದ ಮೂಲಕ ಅನುಮತಿಯನ್ನು ನೀಡಲಾಗಿದೆ. ಹಣ್ಣು ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇದು ಒಳ್ಳೆಯ ಅವಕಾಶವಾಗಿದೆ. ವಾಹನಗಳ ಮೂಲಕ ತಂದು ಮಾರಾಟ ಮಾಡಲು ಮುಂದಾಗಬೇಕು. ಕೃಷಿ ಹಾಗೂ ದಿನ ಬಳಕೆ ಸರಕು ಸಾಗಾಣಿಕೆ ವಾಹನಗಳನ್ನು ತಡೆಯದಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರೈತರು ಆತಂಕಕ್ಕೆ ಒಳಗಾಗಿ ಬೆಳೆಗಳನ್ನು ನಾಶ ಮಾಡದೆ ಸ್ಥಳೀಯ ಸೇರಿದಂತೆ ಅವಕಾಶ ಇರುವ ಯಾವುದೇ ಸ್ಥಳಕ್ಕೆ ಬೇಕಿದ್ದರು ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯಲಾಗಿರುವ ದ್ರಾಕ್ಷಿ ಹಣ್ಣುಗಳನ್ನು ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡಲು ಸಹ ಅನುಮತಿ ನೀಡಲಾಗಿದೆ ಎಂದರು.