ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿ, ‘ಬೆಟ್ಟದಲ್ಲಿ ಸಹಜವಾಗಿ ಹತ್ತಾರು ಜಾತಿಯ ಸಸಿಗಳು ಬೆಳೆಯುತ್ತವೆ. ಆದರೆ, ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿನ ಜನರು ತಪ್ಪು ತಿಳಿವಳಿಕೆಯಿಂದ ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ, ಸಸ್ಯ, ಕೀಟ, ಸಣ್ಣ ಪುಟ್ಟ ಪ್ರಾಣಿಸಂಕುಲ ನಾಶವಾಗುತ್ತಿದೆ. ಜತೆಗೆ ಬೆಟ್ಟ ಬೋಳು ಬೋಳಾಗಿ,ಮೋಡಗಳನ್ನು ತಡೆದು ಮಳೆ ಸುರಿಸುವುದನ್ನೇ ನಿಲ್ಲಿಸಿವೆ’ ಎಂದರು.