ಇಲ್ಲಿನ ವಾಲ್ಮಿಕೀ ವೃತ್ತವನ್ನು ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ (207) ರಲ್ಲಿ, ಗುಂಡಿ ಬಿದ್ದು ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ವಾಹನಗಳ ಸಂಚಾರದಿಂದ, ವಿಪರೀತ ದೂಳಿನ ಕಣಗಳು ಏಳುತ್ತಿವೆ. ವಾಲ್ಮಿಕಿ ವೃತ್ತವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ವಾಣಿಜ್ಯ ವ್ಯವಹಾರ ಹಾಗೂ ಬ್ಯಾಂಕ್ಗಳು, ಶಾಲೆಗಳಿಂದ ಕೂಡಿರುವ ಪ್ರಮುಖ ಕೇಂದ್ರಸ್ಥಾನವಾಗಿದ್ದು, ದಿನ ನಿತ್ಯ ಸಂಚರಿಸುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಯಾಣಿಕರು, ವೃದ್ಧರು ಹಾಗೂ ಸ್ಥಳೀಯ ವ್ಯಾಪರಸ್ಥರು ರಸ್ತೆಯಲ್ಲಿ ಏಳುವ ದೂಳಿನಿಂದ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ.ಸದಸ್ಯ ರಾಘವೇಂದ್ರ ಒತ್ತಾಯಿಸಿದರು.