ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮಿಪತಿ ಮಾತನಾಡಿ, ನಂದಿಬೆಟ್ಟ ಕ್ರಾಸ್ನಿಂದ ಕೊನಘಟ್ಟ ಮಾರ್ಗವಾಗಿ ಆಚಾರ್ಲಳ್ಳಿ, ಕೊನಘಟ್ಟ ಕೊಡಿಗೆಹಳ್ಳಿ, ಸೊಣ್ಣಮಾರನಹಳ್ಳಿ, ಹಮಾಮ್, ಶಿವಪುರ ಮಾರ್ಗವಾಗಿ ದೊಡ್ಡಬಳ್ಳಾಪುರ ತಲುಪಲು ಈ ಹಿಂದೆ ಬಸ್ ಸೌಲಭ್ಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಂದ ನಗರಕ್ಕೆ ಶಾಲೆ, ಕಾಲೇಜುಗಳಿಗೆ ತೆರಳಲು ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪದೇ ಪದೇ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ
ಸೃಷ್ಟಿಯಾಗಿದೆ ಎಂದರು.