ನಿರ್ದೇಶಕ ಎಸ್. ಕೃಪಾಶಂಕರ್ ಮಾತನಾಡಿ, ಜ್ಞಾನವೆಂಬುದು ಒಬ್ಬರ ಸ್ವತ್ತಲ್ಲ, ಅದನ್ನು ಆರಾಧಿಸುವವರು, ಗಳಿಸಬೇಕೆನ್ನುವ ಹಂಬಲವಿರುವವರಿಗೆ ಅದು ಲಭಿಸುತ್ತದೆ. ಒಮ್ಮೆ ಗಳಿಸಿಕೊಂಡ ಆಸ್ತಿ, ಅಂತಸ್ತು, ಅಧಿಕಾರ ಎಲ್ಲವನ್ನೂ ಒಂದು ದಿನ ಕಳೆದುಕೊಳ್ಳಬೇಕಾಗುತ್ತದೆ. ಆದರೆ, ನಾವು ಪಡೆದುಕೊಂಡ ಜ್ಞಾನ ನಮ್ಮ ಅಂತ್ಯದ ದಿನದವರೆಗೂ ನಮ್ಮ ಜೊತೆಗಿದ್ದು ಸಾಧಕರನ್ನಾಗಿ ಮಾಡುತ್ತದೆ ಎಂದರು.