ಸದಸ್ಯ ಎ.ಆರ್.ಹನೀಪುಲ್ಲಾ ಮಾತನಾಡಿ, ಪುರಸಭೆಗೆ ಆಯ್ಕೆಯಾಗಿ ಬಂದ ನಂತರ ಸಾಮಾನ್ಯ ಸಭೆ, ವಿಶೇಷ ಸಭೆಗಳಲ್ಲಿ ಚರ್ಚೆ ಮಾಡಿರುವ ಯಾವ ವಿಚಾರಗಳೂ ಅನುಷ್ಠಾನಕ್ಕೆ ಬರುತ್ತಿಲ್ಲ. ಬಜೆಟ್ ಸಿದ್ಧಪಡಿಸುವ ಮುನ್ನಾ ಸಿದ್ದವಿಟ್ಟುಕೊಂಡಿರಬೇಕಾಗಿರುವ ಡಿಸಿಬಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪುರಸಭೆಗೆ ಬರಬೇಕಾಗಿರುವ ಆದಾಯದ ಕುರಿತು, ಉದ್ದಿಮೆ ಪರವಾನಗಿ ಪಡೆಯದೆ ಇರುವ ಅಂಗಡಿ ಮಳಿಗೆಗಳನ್ನು ಲೆಕ್ಕ ಮಾಡುವಂತೆ ಹೇಳಿದ್ದೆವು. ಇದುವರೆಗೂ ಮಾಡಿಲ್ಲ ಎಂದರು.