ಹೊಸಕೋಟೆ: ಗ್ಲೋಬಲ್ ಟೇಕ್ವಾಂಡೋ ಅಕಾಡೆಮಿಯ ವತಿಯಿಂದ ಜಿಲ್ಲಾ ಮಟ್ಟದ ಟೇಕ್ವಾಂಡೊ (ಕರಾಟೆ) ಕಲರ್ ಬೆಲ್ಟ್ ಪರೀಕ್ಷೆಯನ್ನು ನಗರದ ಸ್ವಾಮಿ ವಿವೇಕಾನಂದ ವಿದ್ಯಾ ಕೆಂದ್ರದ ಶಾಲೆಯಲ್ಲಿ ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ ಹಾಗೂ ಅಕಾಡೆಮಿಯ ಮುಖ್ಯ ಶಿಕ್ಷಕ ಎಂ. ಕಾರ್ತಿಕ್ ಹಾಗೂ ತರಬೇತುದಾರರಾದ ಯಶವಂತಕುಮಾರ್, ಪುರುಷೋತ್ತಮ್ ಮತ್ತು ಕೋಮಲ ಅವರು ಪರೀಕ್ಷೆಯನ್ನು ನಡೆಸಿದರು. ಶಾಲೆಯ ಕಾರ್ಯದರ್ಶಿ ನಾಗರಾಜ ಗುಪ್ತ ಉಪಸ್ಥಿತರಿದ್ದರು.