ಗ್ರಾಮದಲ್ಲಿನ ಎಲ್ಲರೂ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ದುರುದ್ದೇಶಪೂರಕವಾಗಿ ನಮ್ಮ ವಿರುದ್ಧ ಮಾತ್ರ ದೂರುತ್ತಿದ್ದಾರೆ. ರಸ್ತೆ ಒತ್ತುವರಿ ಮಾಡಿಕೊಂಡಿರುವ ಎಲ್ಲರನ್ನು ತೆರವು ಮಾಡಿಸಿದರೆ ನಾವು ಸಹ ರಸ್ತೆಯನ್ನು ಬಿಟ್ಟು ಕೊಡುತ್ತೇವೆ ಎಂದು ರಸ್ತೆ ಒತ್ತುವರಿ ಆರೋಪ ಎದುರಿಸುತ್ತಿರುವ ಹೊನ್ನಾಘಟ್ಟ ಗ್ರಾಮದ ರುದ್ರೇಶ್ಗೌಡ ತಿಳಿಸಿದರು.