ಶಿರಸ್ತೇದಾರ್ ಶಶಿಕಲಾ ಮಾತನಾಡಿ, ಯತೀಂದ್ರರು ಮುಂದೆ ನಡೆಯುವ ಅನೇಕ ಘಟನೆಗಳನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದು ಅಂದೇ ನಮಗೆ ತಿಳಿಸಿದ್ದಾರೆ. ಅವರು ಅಂದು ಕಾಲಜ್ಞಾನದಲ್ಲಿ ತಿಳಿಸಿರುವಂತೆ ಈಗಲೂ ಅನೇಕ ಘಟನೆಗಳು ಸಂಭವಿಸಿ ವಿಸ್ಮಯ ಮೂಡಿಸಿವೆ. ಪವಾಡ ಪುರುಷ, ಕವಿ, ದಾರ್ಶನಿಕ, ಸಮಾಜ ಸುಧಾರಕರಾದ ತಾತಯ್ಯ ಅವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.