ನಂತರ ಮಾತನಾಡಿದ ಅವರು, ‘ಒಂದು ತಿಂಗಳಿನಿಂದ ಅನುಮಾನಾಸ್ಪದವಾಗಿ ಕೊಡಗುರ್ಕಿ ಗ್ರಾಮದ ಒಳ ರಸ್ತೆಯಿಂದ ಅವತಿ ಗ್ರಾಮದ ಮೂಲಕ ಕೊರಮಂಗಲ ವಿಜಯಪುರದ ಕಡೆಗೆ ಸರಕು ಸಾಗಾಣಿಕೆ ವಾಹನ ಸಂಚರಿಸುತ್ತಿರುವುದು ಗಮನಕ್ಕೆ ಬಂತು. ಇಂದು ವಾಯು ವಿಹಾರಕ್ಕೆ ಬಂದಾಗ ಎರಡು ಕ್ಯಾಂಟರ್ ವಾಹನವನ್ನು ನಿಲ್ಲಿಸಿ ಮಾಹಿತಿ ಪಡೆಯಲಾಯಿತು. ‘ತುಮಕೂರು ಎಪಿಎಂಸಿಯಿಂದ ಕೊಬ್ಬರಿ, ಬೇಳೆಕಾಳು ಇದೆ. ಬೇರೇನೂ ಇಲ್ಲ’ ಎಂದು ವಾಹನ ಮಾಲೀಕ ತಿಳಿಸಿದರು. ದಾಖಲಾತಿ ಮತ್ತು ಸರಕು ಸಾಗಿಸುತ್ತಿದ್ದ ವಾಹನದ ಸಂಖ್ಯೆ ಬೇರೆ ಬೇರೆ ಇದ್ದುದ್ದು ಇನ್ನಷ್ಟು ಅನುಮಾನಕ್ಕೆ ಕಾರಣವಾಯಿತು’ ಎಂದು ಹೇಳಿದರು.