ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಡೆದ ಶಿಕ್ಷಕರ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರ ವೇತನ ಹಿಂಬಾಕಿ (ಅರಿಯರ್ಸ್), ಮೂಲ ವೇತನದಲ್ಲಿ ವ್ಯತ್ಯಾಸ, ವೈದ್ಯಕೀಯ ವೆಚ್ಚ ಮರುಪಾವತಿ, ಕುಟುಂಬ ಯೋಜನೆ ಭತ್ಯೆ, ಟಿ.ಜಿ.ಪಿ ಶಿಕ್ಷಕರ ಮೂಲ ವೇತನದಲ್ಲಿ ಏರುಪೇರು ಸೇರಿದಂತೆ ಸಮಸ್ಯೆಗಳಿದ್ದು ನಿವಾರಣೆಯಾದರೆ ನೆಮ್ಮದಿಯಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಒಲ್ಲದ ಮನಸ್ಸಿನಿಂದ ಪಾಠ ಮಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.