ಬಳಿಕ ನಿಮ್ಮ ಕೈಬಳೆ ಮತ್ತು ಒಡವೆಯನ್ನು ತೆಗೆದು ಈ ಕವರ್ ಹಾಕಿ. ಅದನ್ನು ನಮಿಸಿ ದೇವರಿಗೆ ಪ್ರಾರ್ಥಿಸಿ ಮತ್ತೆ ನಿಮಗೆ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಹೇಮಾವತಮ್ಮ ಒಂದು ಬಳೆಯನ್ನು ತೆಗೆದು ಆತನ ಕವರ್ಗೆ ಹಾಕಿದ್ದಾರೆ. ಇನ್ನೊಂದು ಬಳೆ ಬಿಚ್ಚುವಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಕಿಡಿಗೇಡಿಗಳ ಕೃತ್ಯದ ಬಗ್ಗೆ ಪ್ರಶ್ನಿಸಿದ ಕೂಡಲೇ ಪರಾರಿಯಾಗಿದ್ದಾರೆ.