ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧೆ ಯಾಮಾರಿಸಿ ಚಿನ್ನದ ಬಳೆ ಕಳವು

Last Updated 19 ಆಗಸ್ಟ್ 2022, 4:34 IST
ಅಕ್ಷರ ಗಾತ್ರ

ದೇವನಹಳ್ಳಿ: ಮನೆಯ ಬಾಗಿಲಿನಲ್ಲಿ ಪತಿಯ ಜೊತೆಗೆ ಕುಳಿತಿದ್ದ ಹೇಮಾವತಮ್ಮ (89) ಎಂಬ ವೃದ್ಧೆಯ ಬಳಿ ಕೈಚಳಕ ತೋರಿರುವ ಕಳ್ಳರು ಚಿನ್ನದ ಬಳೆ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

14ನೇ ವಾರ್ಡ್‌ನ ನಗರ್ತರ ಬೀದಿಯ ತುಪ್ಪದ ಸಿ.ಆರ್‌. ವೀರಭದ್ರಯ್ಯ ಹಾಗೂ ಅವರ ಪತ್ನಿ ಹೇಮಾವತಮ್ಮ ಸಂಜೆ ಮನೆಯ ಬಾಗಿಲಿನಲ್ಲಿ ಕುಳಿತಿದ್ದರು. ಅವರ ಬಳಿಗೆ ಬಂದ ದುಷ್ಕರ್ಮಿಯೊಬ್ಬ ಬಿಸ್ಕೆಟ್‌ ಪೊಟ್ಟಣ ನೀಡಿ ನಿಮ್ಮ ಆಶೀರ್ವಾದ ಬೇಕು ಎಂದು ಕೋರಿದ್ದಾನೆ.

ಬಳಿಕ ನಿಮ್ಮ ಕೈಬಳೆ ಮತ್ತು ಒಡವೆಯನ್ನು ತೆಗೆದು ಈ ಕವರ್‌ ಹಾಕಿ. ಅದನ್ನು ನಮಿಸಿ ದೇವರಿಗೆ ಪ್ರಾರ್ಥಿಸಿ ಮತ್ತೆ ನಿಮಗೆ ವಾಪಸ್‌ ಕೊಡುತ್ತೇವೆ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಹೇಮಾವತಮ್ಮ ಒಂದು ಬಳೆಯನ್ನು ತೆಗೆದು ಆತನ ಕವರ್‌ಗೆ ಹಾಕಿದ್ದಾರೆ. ಇನ್ನೊಂದು ಬಳೆ ಬಿಚ್ಚುವಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಕಿಡಿಗೇಡಿಗಳ ಕೃತ್ಯದ ಬಗ್ಗೆ ‍ಪ್ರಶ್ನಿಸಿದ ಕೂಡಲೇ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT