ರಾಜಕಾಲುವೆ ತ್ಯಾಜ್ಯ ನೀರೇ ದೊಡ್ಡ ಸಮಸ್ಯೆ ಎಂದು ಅಶ್ವತ್ಥಪ್ಪ ಹಾಗೂ ನವೀನ್ ಕುಮಾರ್ ಅವರ ಆರೋಪ. ದೇವನಹಳ್ಳಿ ನಗರ ಪುಟ್ಟಪ್ಪನಗುಡಿ ಬೀದಿ ಚನ್ನರಾಯಪಟ್ಟಣ ರಸ್ತೆ ಬಳಿ ಈ ಹಿಂದೆ ಮಾಡಿರುವ ರಾಜಕಾಲುವೆ ಅವೈಜ್ಞಾನಿಕವಾಗಿದೆ ಎಂದು ಗೋಪಿನಾಥ್ ಮತ್ತು ರಾಮಚಂದ್ರಪ್ಪ ಸಮಸ್ಯೆಗಳತ್ತ ಬೊಟ್ಟು ಮಾಡಿದರು. ಇದಕ್ಕೆ ಸ್ಥಳೀಯರಾದ ಎ.ವಿ.ನಾಗೇಶ್, ಜಿ.ನವೀನ್ ಕುಮಾರ್, ಕೈಲಾಶ್, ಗೋಪಾಲಕೃಷ್ಣಪ್ಪ, ಬಿಕಾರಾಮ್, ವೆಂಕಟೇಶ್, ಮಹೇಶ್, ಎನ್.ಹರೀಶ್ ಧ್ವನಿಗೂಡಿಸಿದರು.