ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕಿ ವರ್ಷಗಳೇ ಕಳೆದಿವೆ. ಪಂಚಾಯಿತಿಯ ಗಮನಕ್ಕೆ ತಂದರೆ ಅವರು ಸ್ಥಳೀಯ ಸದಸ್ಯರಿಗೆ ಹೇಳಿ ಎನ್ನುತ್ತಾರೆ. ಸದಸ್ಯರನ್ನು ಕೇಳಿದರೆ ಜಲಗಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಾರೆ. ನಾವು ಯಾರನ್ನು ಕೇಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಮುನಿಯಪ್ಪ, ಸಿ. ನಾರಾಯಣಪ್ಪ, ಹನುಮಕ್ಕ, ಮುಕುಂದ್ ಬೇಸರ ತೋಡಿಕೊಂಡರು.