ಪಂಡರಿ ಮಾಸ್ಟರ್ ವೆಂಕಟರಾಜು, ಸೊಸೈಟಿ ಚನ್ನರಾಜು ಮತ್ತು ಭೈರರಾಜು ಕುಟುಂಬದವರು ರಾಜಮುಡಿ ಉತ್ಸವ ಆಯೋಜಿಸಿದ್ದರು. ತಹಶೀಲ್ದಾರ್ ಪಿ. ದಿನೇಶ್, ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಉಪಾಧ್ಯಕ್ಷೆ ಮಾಲಾ ಭಾರ್ಗವ್, ಸದಸ್ಯೆ ಪವಿತ್ರಾ ರಘು, ಆಧ್ಯಾತ್ಮಿಕ ಚಿಂತಕರಾದ ರಾಮಚಂದ್ರ ಭಟ್, ಲಕ್ಷ್ಮಿನಾರಾಯಣಚಾರ್ಯ ಇದ್ದರು. ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ರಾಜಮುಡಿ ಉತ್ಸವ ನಡೆಸಲಾಯಿತು. ನೂರಾರು ಭಕ್ತರು ವೈಭವದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಯದುವೀರ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದೇವಾಲಯ ಸಮಿತಿಯು ಪ್ರತಿ ವರ್ಷ ರಾಜಮುಡಿ ಉತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.