ಕೋಟ್ಯಂತರ ರೂಪಾಯಿ ವರಮಾನ ಬರುವ ಅರಣ್ಯ ಇಲಾಖೆಗೆ ಅರಣ್ಯೀಕರಣಕ್ಕೆ ಅದೇ ರೀತಿ ಅನುದಾನ ಬಿಡುಗಡೆಯಾಗುತ್ತದೆ. ಅದೇ ಅನುದಾನದಲ್ಲಿ ಕಾಡಿನ ಆಯಾ ಪ್ರಮುಖ ಸ್ಥಳದಲ್ಲಿ ಗುಂಡಿ ಹೊಂಡ ನಿರ್ಮಾಣ ಮಾಡಿ ವಾರಕ್ಕೆ ಎರಡು ಬಾರಿ ನೀರು ತುಂಬಿಸಿದರೆ ಅಪಾರ ಪ್ರಮಾಣದ ನವಿಲು, ಮೊಲ, ಕಡವೆ, ಕಾಡು ಹಂದಿ ಇತರೆ ಪ್ರಾಣಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಮುಳ್ಳಿನ ತಂತಿ ತೆಗೆದು ನಯವಾದ ತಂತಿ ಬೇಲಿ ಅಳವಡಿಸಲು ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.