ದೊಡ್ಡಬಳ್ಳಾಪುರ:ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ವಾಣಿಗರಹಳ್ಳಿ ಸಮೀಪ ಶನಿವಾರ ರಾತ್ರಿ ಟಿಪ್ಪರ್ ಡಿಕ್ಕಿ ಹೊಡೆದು ಲಲಿತಮ್ಮ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮರಳೇನಹಳ್ಳಿ ಗ್ರಾಮದ ಪತಿ ರಾಜಣ್ಣ, ಮಗ ಕಾರ್ತಿಕ್ ಅವರೊಂದಿಗೆ ಬೈಕ್ನಲ್ಲಿ ಚನ್ನವೀರನಹಳ್ಳಿಯ ತವರು ಮನೆಗೆ ಹೋಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಾಜಣ್ಣ, ಕಾರ್ತಿಕ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ವ್ಯಾಪ್ತಿಯಲ್ಲಿ ಮಿತಿಮೀರಿದ ಗಣಿಗಾರಿಕೆಯಿಂದ ಅಪಘಾತಗಳು ಸಂಭವಿಸಿ ಅಪಾಯಕರ ಜೀವ ಬಲಿಯಾಗುತ್ತಿವೆ ಜನರು ದೂರಿದ್ದಾರೆ.