ಡಿ. 11ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದರೂ ಅಮಾವಾಸ್ಯೆ, ಪಾಡ್ಯಮಿ, ಮಂಗಳವಾರದಂದು ನಾಮಪತ್ರ ಸಲ್ಲಿಕೆ ಮಾಡಿದರೆ, ಚುನಾವಣೆಯಲ್ಲಿ ಒಳಿತಾಗುವುದಿಲ್ಲ ಎನ್ನುವ ಭಯದಿಂದ ಕೊನೆಯ ದಿನದಂದು ಒಳ್ಳೆಯ ಸಮಯ ನೋಡಿಕೊಂಡು ನಾಮಪತ್ರ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು. ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಪಂಚಾಯಿತಿಗಳ ಮುಂದೆ ಜಮಾಯಿಸಿದ್ದರು.