ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದ ರೈತ ಗೋಪಾಲಪ್ಪ ಅವರು ಮಾತನಾಡಿ, ‘ನನಗಿರುವ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಿದ್ದೇನೆ. ಒಂದು ಎಕರೆ ಪ್ರದೇಶದಲ್ಲಿ ಚೆರ್ರಿ ತಳಿಯ ಟೊಮೆಟೊ ಬೆಳೆದಿದ್ದೇನೆ. ಗಿಡದ ತುಂಬಾ ಕಾಯಿ ಬಿಡುತ್ತಿದ್ದಂತೆ ಮನೆ ಕಟ್ಟಲು, ತೋಟಗಳಿಗೆ ಮಾಡಿರುವ ಸಾಲವನ್ನು ಈ ಬಾರಿಯಾದರೂ ತೀರಿಸಿಕೊಂಡು ನೆಮ್ಮದಿಯ ಜೀವ ನಡೆಸುವ ಆಲೋಚನೆ ಮಾಡುತ್ತಿರುವಾಗಲೇ ಆವರಿಸಿದ ಕೊರೊನಾ ಭೀತಿ ಹಾಗೂ ಲಾಕ್ಡೌನ್ ಆದೇಶದ ಹಿನ್ನೆಲೆಯಲ್ಲಿ ತೋಟದಲ್ಲೆ ಹಣ್ಣಾದ ಟೊಮೆಟೊ ಹಣ್ಣನ್ನು ಎರಡು ಬಾರಿ ಮಾತ್ರ ಕಿತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಪ್ರತಿ ಕೆ.ಜಿಗೆ ₹ 100ರಂತೆ ಮಾರಾಟವಾಗಬೇಕಾಗಿದ್ದದ್ದು, ಕೇವಲ ₹ 20ಕ್ಕೆ ಮಾರಾಟ ಮಾಡಬೇಕಾಗಿದೆ’ ಎಂದರು.