ಮಹಾರಥೋತ್ಸವದ ಅಂಗವಾಗಿ ಸೋಮವಾರ ಸ್ವಾಮಿಗೆ ರಾಜೋಪಾಚಾರ, ತ್ರಿಮುಖ ಗಣಪತಿ, ಅನ್ನಪೂರ್ಣೇಶ್ವರಿ ಹಾಗೂ ಕಾಶೀ ವಿಶ್ವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವೀರಗಾಸೆ, ವೃಷಭ ವಾಹನೋತ್ಸವ, ಕರಡಿ ವಾಧ್ಯ ಹಾಗೂ ಅಗ್ನಿಕೊಂಡ ನಡೆಯಲಿದೆ. ಏ.9ರಂದು ಮಹಾ ರಥೋತ್ಸವ ನಡೆಯಲಿದೆ. ರಾಜಾಪುರ ಶ್ರೀಗಳು, ಕನಕಪುರ ಮರಳೇಗವಿ ಮಠದ ಶ್ರೀಗಳು, ಗುಮ್ಮಳಾಪುರ, ಬೆಳ್ಳಾವಿ, ನಾಗಲಾಪುರ ಹಾಗೂ ಚಿಕ್ಕಕಲ್ಲುಬಾಳು ಶ್ರೀಗಳ ಸಾನಿಧ್ಯದಲ್ಲಿ ರಥೋತ್ಸವ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ನಡೆಯಲಿದೆ. ಗ್ರಾಮದ 27ಗ್ರಾಮ ದೇವತೆಗಳ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.