ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಯಲಚಿಪಾಳ್ಯ ಕ್ರಾಸ್ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಅಕ್ರಮವಾಗಿ ಗಾಂಜಾ ಸೊಪ್ಪು ಸಾಗಣೆ ಮಾಡುತ್ತಿದ್ದ 5 ಮಂದಿಯನ್ನು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿ 2ಕೆ.ಜಿ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಯಲಚಿಪಾಳ್ಯ ಗ್ರಾಮದ ಗುರು ಆಲಿಯಾಸ್ ಸುಪ್ರೀತ್ ಕುಮಾರ್, ವೆಂಕಟೇಶ ಬಿನ್ ವೆಂಕಟಪ್ಪ, ಉಮೇಶ ಆಲಿಯಾಸ್ ಗಿಡ್ಡ, ಹನೂರು ಗ್ರಾಮದ ಈಶ್ವರ್, ಅನಿಲ್ ಬಂಧಿತರು. ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.