ಈ ಹೆದ್ದಾರಿಯಲ್ಲಿ ವಸತಿ ಪ್ರದೇಶ ಕಡಿಮೆಯಿದ್ದು, ಜನರ ಓಡಾಟ ಇಲ್ಲದಿರುವ ಹಾಗೂ ಕೈಗಾರಿಕೆಗಳಿಗೆ ಬರುವ, ಹೆದ್ದಾರಿಯಲ್ಲಿ ಸಾಗುವ ವಾಹನಗಳು ಮಾತ್ರ ಸಂಚರಿಸುವ ಪ್ರದೇಶವಾಗಿದೆ. ಇಲ್ಲಿ ಯಾರು ಹೇಳುವವರು ಕೇಳುವವರು ಇಲ್ಲದ ಅನಾಥವಾಗಿರುವ ನಿರ್ಜನ ಪ್ರದೇಶವಾಗಿರುವುದರಿಂದ ಕೈಗಾರಿಕೆಯವರು ಹಾಗೂ ವಸತಿ ಸಮುಚ್ಚಯದವರು ತ್ಯಾಜ್ಯವನ್ನು ಎಸೆದು ಹೋಗುವುದಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ ಎಂದು ದೂರಲಾಗಿದೆ.