ದೇಶದಾದ್ಯಂತ 150 ನೇ ಗಾಂಧಿ ಜಯಂತಿಯನ್ನು ಸ್ವಚ್ಛತಾ ದಿವಸವನ್ನಾಗಿ ಆಚರಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತದ ಕಲ್ಪನೆಯನ್ನು ಕೇಂದ್ರ ಸರ್ಕಾರ ದೇಶದ ಮುಂದಿಟ್ಟಿರುವ ಸಂದರ್ಭದಲ್ಲಿಯೇ ಹಲವಾರು ಕಡೆ ಕಸ ಮತ್ತು ಪ್ಲಾಸ್ಟಿಕ್ ಸಮಸ್ಯೆ ತಾಂಡವವಾಡುತ್ತಿರುವುದು ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯ ಬದಿಯಲ್ಲಿ ಕಾಣುತ್ತಿದೆ.